ಶಿವಮೊಗ್ಗ: ಸಹ್ಯಾದ್ರಿ ಉತ್ಸವದ ಅಂಗವಾಗಿ ಜ. 23ರಿಂದ 27ರವರೆಗೆ ನಗರದ ನಿಧಿಗೆ ಕೆರೆಯಲ್ಲಿ ರಿಯಾಯ್ತಿ ದರದಲ್ಲಿ ಜಲಕ್ರೀಡೆಯನ್ನು ಜಿಲ್ಲಾಡಳಿತ ಆಯೋಜಿಸಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಹನುಮ ನಾಯ್ಕ ತಿಳಿಸಿದ್ದಾರೆ.
ಇದೇ ಪ್ರಥಮ ಬಾರಿ ಉತ್ಸವದ ಅಂಗವಾಗಿ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ರಾಜ್ಯ ಮಟ್ಟದ ಸೈಕಲ್ ಸ್ಪರ್ದೆಯನ್ನು ಸಹ ಆಯೋಜಿಸಲಾಗಿದೆ. ಮಹಿಳೆಯ ಸೈಕಲ್ ಸ್ಪರ್ಧೆ ಸುರಗೊಂಡನಕೊಪ್ಪ ಸೇವಾಲಾಲ್ ಮಂದಿರದಿಂದ ನಗರದ ಕೃಷಿ ಕಾಲೇಜಿನವರೆಗೆ ಹಾಗೂ ಪುರುಷರಿಗೆ ಶಿಕಾರಿಪುರ ಹುಚ್ಚರಾಯಸ್ವಾಮಿ ದೇವಾಲಯದಿಂದ ಕೃಷಿ ಕಾಲೇಜಿನ ವರೆಗೂ ಕ್ರಮಿಸುವ ಸವಾಲು ಇರಿಸಲಾಗಿದೆ. ಸ್ಪರ್ದೆಗೆ ಹೆಸರು ನೊಂದಾಯಿಸುವವರು ದಿಲೀಪ್ ನಾಡಿಗ್-9448148710, ಲೋಕೇಶ್- 9483778002 ಇವರನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

error: Content is protected !!