ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆ ಮಾಡಿದ ಕೊಲೆಗಡುಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತನೆಂದು ಹಾಡಿ ಹೊಗಳಿರುವ ಬಿಜೆಪಿ ನಾಯಕಿ ಪ್ರಜ್ಞಾ ಸಿಂಗ್ ಹಾಗೂ ಬಿಜೆಪಿ ಸಂಸದರು ಬಿಜೆಪಿ ಪಕ್ಷದ ನಾಯಕರ ಹೇಳಿಕೆಯನ್ನು ಖಂಡಿಸಿ ಕೆ.ಪಿ.ಸಿ.ಸಿ ನಿರ್ದೇಶನದಂತೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಯಿಂದ ಬೃಹತ್ ಪ್ರತಿಭಟನೆಯನ್ನು ನೆಡೆಸಲಾಯಿತು.

ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್. ಎಸ್. ಸುಂದರೇಶ್ ರವರ ಅಧ್ಯಕ್ಷತೆ ಯಲ್ಲಿ ಶಿವಮೊಗ್ಗ ಕಾಂಗ್ರೆಸ್ ಭವನದಿಂದ ಪ್ರತಿಭಟನೆ ಮೆರವಣಿಗೆ ಆರಂಭವಾಗಿ ಮಹಾವೀರ ಸರ್ಕಲ್ ನಲ್ಲಿ ದಹನ ಮಾಡುವುದರ ಮೂಲಕ ಪ್ರತಿಭಟಿಸಲಾಯಿತು.

ದೇಶದ್ರೋಹಿ ಹೇಳಿಕೆ ನೀಡಿರುವ ಬಿಜೆಪಿ ನಾಯಕರಿಗೆ ಧಿಕ್ಕಾರ, ಬಿಜೆಪಿಯ ಪ್ರಜ್ಞಾ ಸಿಂಗ್ ಗೆ ಧಿಕ್ಕಾರ,ರಾಷ್ಟ್ರಪಿತರನ್ನು ಕೊಲೆಗೈದವರನ್ನು ದೇಶಭಕ್ತ ಎಂದು ಕರೆದ ಬಿಜೆಪಿ ನಾಯಕರಿಗೆ ಧಿಕ್ಕಾರ,
ದೇಶಭಕ್ತರ ಪೋಷಾಕಿನಲ್ಲಿ ದೇಶ ವಿಭಜನೆ ಕೆಲಸ ಮಾಡುವ ಬಿಜೆಪಿಗೆ ಧಿಕ್ಕಾರ, ದೇಶದ್ರೋಹಿ ನಳೀನ ಕುಮಾರ್ ಗೆ ಧಿಕ್ಕಾರ,ದೇಶದ್ರೋಹಿ ಅನಂತ ಕುಮಾರ್ ಹೆಗೆಡೆಗೆ ಧಿಕ್ಕಾರ
ಮುಂತಾದ ಘೋಷಣೆಗಳನ್ನು ಕೂಗಿ ಪ್ರತಿಭಟಿಸಲಾಯಿತು

ಈ ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರಾದ ರಮೇಶ್ ಹೆಗಡೆ. ಶಾಮೀರ್ ಖಾನ್. ಕಾಂಗ್ರೆಸ್ ಪ್ರಮುಖರಾದ ಎನ್. ರಮೇಶ್, ವಿಶ್ವನಾಥ್ ಕಾಶಿ,ಬಿ ನಾಗರಾಜ್, ಎಲ್ ರಾಮೇಗೌಡ, ಬಾಲಾಜಿ, ಗಿರೀಶ್, ವೈ.ಹೆಚ್.ನಾಗರಾಜ್.ವಿ.ರಾಜು. ಎಸ್ಎ ಬಾಬು.ಎಂ ಎಲ್ ಮೂರ್ತಿ. ಪ್ರಭಾಕರ ಗೌಡ. ಅನಿತಾ ದೇವಿ. ಇನ್ನು ಮುಂತಾದ ಪಕ್ಷದ ಎಲ್ಲಾ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.

error: Content is protected !!