ಜಿಲ್ಲೆಯಲ್ಲಿ ನಡೆಯುತ್ತಿರುವ ಸಹ್ಯಾದ್ರಿ ಉತ್ಸವಕ್ಕೆ ಶಿಕಾರಿಪುರ ದಿಂದ ಶಿವಮೊಗ್ಗಕ್ಕೆ ಪುರುಷರ ಸೈಕಲ್ ಜಾತಕ್ಕೆ ಮಾಜಿ ಅಂಧರ ಕ್ರಿಕೆಟ್ ಕ್ಯಾಪ್ಟನ್ ಶೇಖರ ನಾಯ್ಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ನನಗೆ ತುಂಬಾ ಸಂತೋಷವಾಗುತ್ತಿದೆ ಈ ಉಧ್ಗಾಟನಾ ಕಾರ್ಯಕ್ರಮದಲ್ಲಿ ಬಾಗವಹಿಸುತ್ತಿರುವುದು, ಸೈಕ್ಲಿಂಗ್ ನಮ್ಮ ಆರೋಗ್ಯವನ್ನಷ್ಟೇ ಅಲ್ಲದೆ ಸುತ್ತಮುತ್ತಲಿನ ಆರೋಗ್ಯವನ್ನು ಸಹ ಕಾಪಾಡುತ್ತದೆ. ಸೈಕ್ಲಿಂಗ್ ಯಾವುದೇ ಮಾಲಿನ್ಯ ಮಾಡದಂತೆ ನಮ್ಮನ್ನು ದೂರದ ಊರಿಗೆ ಕೊಂಡುಯ್ಯತ್ತದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಪರಿಸರ ವಾಯು ಮಾಲಿನ್ಯದಿಂದ ಪರಿಸರ ಸಾಕಷ್ಟು ಹದಗೆಡುತ್ತಿದೆ. ಸೈಕಲ್ ಉಪಯೋಗಿಸಿ ಪರಿಸರವನ್ನು ಕಾಪಾಡೋಣ ಮುಂದಿನ ಪೀಳಿಗೆಗೆ ಪ್ರೇರಣೆಯಾಗೋಣ ಎಂದು ಹೇಳಿದರು.
ಕಾರ್ಯಕ್ರದಲ್ಲಿ ಜಿಲ್ಲಾದಿಕಾರಿ ಕೆ.ಎ ದಯಾನಂದ್ ಮಾತನಾಡಿ ಸಹ್ಯಾದ್ರಿ ಉತ್ಸವದ ಅಂಗವಾಗಿ ಸೈಕಲ್ ಸ್ಪರ್ಧೆಯನ್ನು ನಡೆಸಲಾಗಿದೆ. ಇದರ ಮೂಲ ಉದ್ದೇಶ ಸೈಕಲ್ ಬಳಕೆ ಜನರಲ್ಲಿ ಜಾಗ್ರತಿ ಮೂಡಬೇಕು ಹಾಗು ಸ್ಪರ್ಧಾ ಮನೋಭಾವ ಬೆಳೆಯಬೇಕು ಎನ್ನುವ ಉದ್ದೇಶದಿಂದ ಈ ಸೈಕಲ್ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

error: Content is protected !!