ಶಿವಮೊಗ್ಗ, ಮೇ.22 : ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಅಂತರಗಂಗೆ, ಹೊಸನಗರದÀ ಅಮೃತ, ಸಾಗರದ ಆನಂದಪುರ, ಶಿಕಾರಿಪುರದ ಶಿರಾಳಕೊಪ್ಪ, ಹಿತ್ತಲ, ಶಿವಮೊಗ್ಗದ ಶೆಟ್ಟಿಹಳ್ಳಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಬಿ.ಹೆಚ್ ರಸ್ತೆ ಶಿವಮೊಗ್ಗ, ಗಾಜನೂರು, ಸೊರಬದ ಆನವಟ್ಟಿ, ತೀರ್ಥಹಳ್ಳಿಯ ಕೊಣಂದೂರು ಈ ಸ್ಥಳಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗಿದ್ದು ಹತ್ತು ತಿಂಗಳ ಅವಧಿಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಪದವಿ ಪೂರ್ವ ಶಿಕ್ಷಣದಲ್ಲಿ 50%ಕ್ಕಿಂತ ಅಧಿಕ ಅಂಕ ಪಡೆದ ಹಾಗೂ ಎನ್‍ಸಿಟಿಇನಿಂದ ಮಾನ್ಯತೆ ಪಡೆದ ಎರಡು ವರ್ಷ ಅಥವ ಹೆಚ್ಚಿನ ಡಿಪ್ಲಮೋ ಇನ್ ನರ್ಸರಿ ಟೀಚರ್, ಪ್ರಿ-ಸ್ಕೂಲ್, ಅರ್ಲಿ ಚೈಲ್ಡ್ ಹುಡ್ ಎಜುಕೇಷನ್ ಪ್ರೋಗ್ರಾಮ್ ಅಥವ ಬಿ.ಎಡ್ ನರ್ಸರಿ ವಿದ್ಯಾರ್ಹತೆ ಹೊಂದಿರುವ 45 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮಾಸಿಕ ವೇತನ 7500/-ರೂ.ಗಳನ್ನು ನಿಗದಿ ಪಡಿಸಲಾಗಿದೆ. ಎಸ್‍ಎಸ್‍ಎಲ್‍ಸಿ ಉತ್ತೀರ್ಣ ಹೊಂದಿರುವ ಸ್ಥಳಿಯ ಮಹಿಳೆಯರೊಬ್ಬರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು ಅರ್ಜಿ ಸಲ್ಲಿಸಲು ಕೋರಲಾಗಿದ್ದು ಮಾಸಿಕ ವೇತನ 7000/-ರೂ.ಗಳನ್ನು ನಿಗದಿಪಡಿಸಲಾಗಿದೆ. ಅರ್ಜಿಯನ್ನು ಆಯಾ ತಾಲ್ಲೂಕುಗಳ ಕೆಪಿಎಸ್ ಶಾಲೆಗಳ ಮುಖ್ಯ ಶಿಕ್ಷಕರಿಗೆ ಮೇ 27ರೊಳಗಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ.

error: Content is protected !!