News Next

ಶಿವಮೊಗ್ಗ, ಜನವರಿ 20 : ಶಿವಮೊಗ್ಗ ತಾಲೂಕು ವ್ಯಾಪ್ತಿಯಲ್ಲಿ ಪರವಾನಿಗೆ ಇಲ್ಲದೆ ನಕಲಿ ರಾಸಾಯನಿಕ ಗೊಬ್ಬರ ಮಾರಾಟ ಮಾಡುತ್ತಿರುವುದು ಅಥವಾ ನೇರವಾಗಿ ರೈತರ ಜಮೀನಿಗೆ ನೀಡುತ್ತಿರುವುದು ಕಂಡುಬಂದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಮಾಹಿತಿ ನೀಡುವಂತೆ ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ನಕಲಿ ರಾಸಾಯನಿಕ ಗೊಬ್ಬರಗಳು ಪೋಷಕಾಂಸಗಳನ್ನು ಹೊಂದಿರುವುದಿಲ್ಲ. ವಿಷಪೂರಿತವಾದ ರಾಸಾಯನಿಕಗಳನ್ನು ಒಳಗೊಂಡಿದ್ದು, ಇದನ್ನು ಬಳಸಿದರೆ ಭೂಮಿ ಮತ್ತು ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾದ್ದರಿಂದ ರೈತರು ಯಾವುದೇ ಕಾರಣಕ್ಕೂ ಕಡಿಮೆ ದರದಲ್ಲಿ ಸಿಗುವ ಇಂತಹ ಗೊಬ್ಬರವನ್ನು ಬಳಸಬಾರದೆಂದು ಸಹಾಯಕ ಕೃಷಿ ನಿರ್ದೇಶಕರು ಎಚ್ಚರಿಸಿದ್ದಾರೆ.

error: Content is protected !!