ನಂತರ ಮಾತನಾಡಿದ ಅವರು ಸಾಮಾಜಿಕ ಅಂತರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಈಗಾಗಲೇ ಹಲವಾರು ದಿನಗಳಿಂದ ದೇಶವೇ ಲಾಕ್ ಡೌನ್ ಆಗಿರುವುದರಿಂದ ಜನರು ಮನೆಯಿಂದ ಹೊರಬರಲು ಸಾಧ್ಯವಾಗದೆ ಮನೆಯಲ್ಲೇ ಇದ್ದಾರೆ ಬಡವರ್ಗದವರಿಗೆ ಸರ್ಕಾರ ನೀಡುವ ಸವಲತ್ತುಗಳು ಹಾಗೂ ವೈಯಕ್ತಿಕವಾಗಿಯೂ ಜನರಿಗೆ ಆಹಾರ ಪದಾರ್ಥಗಳನ್ನು ತಲುಪಿಸಲಾಗುತ್ತಿದೆ ಹತ್ತು ಸಾವಿರಕ್ಕೂ ಹೆಚ್ಚು ಆಹಾರ ಕಿಟ್ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು 
ಸರ್ಕಾರ ನೀಡುವ ಆಹಾರ ಕಿಟ್ ನಮಗೆ ಉಪಯುಕ್ತವಾಗಿತ್ತು ಈ ಸಂದರ್ಭದಲ್ಲಿ ಸರ್ಕಾರ ನೀಡುತ್ತಿರುವುದು ನಮಗೆ ಸಂತಸ ತಂದಿದೆ ಪದಾರ್ಥ ಕೊಳಲು  ನಮಗೆ ಸಾಧ್ಯವಾಗದೇ ಇರುವುದರಿಂದ  ಈ ರೀತಿಯ ಸಹಾಯಕೆ ನಾವು ಚಿರಋಣಿಯಾಗಿದ್ದೇವೆ ಎಂದು ಆಹಾರ ಕಿಟ್ ಪಡೆದ ಮಹದೇವ್  ತಿಳಿಸಿದರು

error: Content is protected !!