ಶಿವಮೊಗ್ಗ,ಜು.೩೧:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಮಾಡಲು ಬಿಜಿಪಿಯವರು ಕೈಗೊಂಡಿರುವ ಮೈಸೂರು ಪಾದಯಾತ್ರೆ ವಿರೋಧಿಸಿ ಅ.೧ ರ ನಾಳೆ ಜಿಲ್ಲಾಧಿಕಾರಿ ಗಳ ಕಛೇರಿ ಎದುರು ಉಪವಾಸ ಸತ್ಯಾಗ್ರಹವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಹಿಂದುಳಿದ ವರ್ಗಗಳ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್ ಪಿ ಶೇಷಾದ್ರಿ ಹಾಗು ಉಪಾಧ್ಯಕ್ಷ ಇಕ್ಕೇರಿ ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಕಳಂಕ ರಹಿತರಾಗಿದ್ದಾರೆ. ಎಲ್ಲಾವರ್ಗದ ಹಿತಕ್ಕಾಗಿ ಪಣ ತೊಟ್ಟಿದ್ದಾರೆ.ಆದರೆ ಇಂತಹ ಮುಖ್ಯ ಮಂತ್ರಿಯನ್ನು ಅಧಿಕಾರದಿಂದ ಕೆಳಗೆ ಇಳಿಸ ಬೇಕು ಎಂದು ಕೆಲ ಬಿಜಿಪಿ ಮತ್ತು ಜೆಡಿಎಸ್ ಮುಖಂಡರು ಹುನ್ನಾರ ನೆಡಿಸಿದ್ದಾರೆ.ಇದನ್ನು ಖಂಡಿಸಿ ಈ ಉಪವಾಸ ಸತ್ಯಾಗ್ರಹ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ ಆಗಸ್ಟ್ ೨ ರಂದು ಗೋಪಿ ವೃತ್ತದಲ್ಲಿ ಬೆಳಗ್ಗೆ ೧೧ ಗಂಟೆಗೆ ಕತ್ತೆಗಳ ಮೆರೆವಣಿಗೆ ಮೂಲಕ ಪ್ರತಿಭಟನೆ ಮಾಡಲು ಸಹ ಯೋಚಿಸಲಾಗಿದೆ .ಹಿಂದುಳಿದ ವರ್ಗಗಳ ಮುಖಂಡರು,ಕಾರ್ಯಕರ್ತರು ಅಹಿಂದಾ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.

error: Content is protected !!