ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 2024ರ ಅತ್ಯುತ್ತಮ ವಿದ್ಯುನ್ಮಾನ ವಾಹಿನಿಯ ಪ್ರಶಸ್ತಿಯನ್ನು ದೂರದರ್ಶನ ವರದಿಗಾರ ಜಯಂತ್ ರವರಿಗೆ ನೀಡಿದೆ

ಕಳೆದ 20 ವರ್ಷಗಳಿಂದ ಗಣನೀಯವಾಗಿ ವಿದ್ಯುನ್ಮಾನ ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಜಯಂತ್ ರವರು ಅವರ ಕಾರ್ಯಕ್ಷಮತೆಯನ್ನು ಗಮನಿಸಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ 2024ರ ಅತ್ಯುತ್ತಮ ವಿದ್ಯುನ್ಮಾನ ವಾಹಿನಿಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ನಿನ್ನೆ ನಡೆದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಜಿಲ್ಲೆಯ ಪತ್ರಕರ್ತರನ್ನು ಸನ್ಮಾನಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು

error: Content is protected !!