ಶಿವಮೊಗ್ಗ,ಜು.17: ತುಂಗೆ ನಮ್ಮ ಜೀವನಾಡಿ, ಮಲೆನಾಡಿಗರಿಗೆ ಸದಾ ಕಾಲ ರಕ್ಷಣೆ ನೀಡುವ ತಾಯಿಯಾಗಿದ್ದು, ನಮ್ಮ ಸಂಸ್ಕøತಿ ಧರ್ಮದ ಪ್ರತೀಕವಾಗಿ ಭಕ್ತಿ ಪೂರ್ವಕವಾಗಿ ಪೂಜೆ ಮಾಡಿ ತುಂಬಿದ ತುಂಗಿಗೆ ಇಂದು ಬಾಗೀನವನ್ನು ಸಮರ್ಪಿಸಿದ್ದೇವೆ ಎಂದು ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಹೇಳಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗೆಯ ಶುದ್ಧೀಕರಣಕ್ಕೆ ಬೇಕಾದ ಎಲ್ಲಾ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ನಗರ ಮಟ್ಟದಲ್ಲಿ ಈಗಾಗಲೇ ಈ ನಿಟ್ಟಿನಲ್ಲಿ ಅನೇಕ ಕಾರ್ಯಗಳು ಆಗಿವೆ. ಆದರೆ, ನಗರದ ಹೊರಗೆ ಕೂಡ ಶುದ್ಧ ತುಂಗೆ ಹರಿದುಹೋಗಲು ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದರು.
ನಟ ಅನಿರುದ್ಧ್ ಕೂಡ ಬೇಟಿಯಾಗಿ ಶುದ್ಧ ತುಂಗೆಗಾಗಿ ಅವರ ಪರಿಕಲ್ಪನೆಯನ್ನು ವಿವರಿಸಿದ್ದಾರೆ. ಶೃಂಗೇರಿಯಿಂದ ಮಂತ್ರಾಲಯದವರೆಗೆ ಪಾದಯಾತ್ರೆ ಮಾಡಿ ತುಂಗೆಯ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಅವರಿಗೆ ನಮ್ಮ ಸಹಕಾರ ಇದೆ ಎಂದು ಹೇಳಿದ್ದೇನೆ ಎಂದರು.
ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರವಾಗಿದ್ದು, ಪರಿಶಿಷ್ಟ ವರ್ಗ, ಪಂಗಡಗಳ ಹಣವನ್ನು ನುಂಗಿದ್ದಾರೆ. ಈ ಬಗ್ಗೆ ಸ್ವತಃ ಶಿವಮೊಗ್ಗದ ಚಂದ್ರಶೇಖರ್ ತಮ್ಮ ಡೆತ್‍ನೋಟ್ ಬರೆದಿಟ್ಟು ಪ್ರಕರಣ ಬೆಳಕಿಗೆ ತಂದಿದ್ದಾರೆ. ಇದೊಂದು ಸರ್ಕಾರಿ ಪ್ರಾಯೋಜಿತ ಕೊಲೆಯಾಗಿದೆ. ಇದನ್ನು ಸದನದಲ್ಲಿ ಗುರುವಾರ ಚರ್ಚೆ ಮಾಡಲಿದ್ದೇನೆ. ಮತ್ತೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ನೀಡಬೇಕು ಎಂದು ಕೂಡ ನೆನ್ನೆ ಸದನದಲ್ಲಿ ಒತ್ತಾಯಿಸಿದ್ದೇವೆ ಎಂದರು.
ನಗರದಲ್ಲಿ ಹಾದುಹೋಗುವ ಸುಮಾರು 11ಕಿ.ಮೀ. ಎಡದಂಡೆ ಕಾಲುವೆಯ ಎರಡು ಬದಿಯ ಜಾಗವನ್ನು ಅತಿಕ್ರಮಣ ಮಾಡುತ್ತಿದ್ದು, ಅದರ ತಡೆಗೆ ಎರಡು ಬದಿಯಲ್ಲಿ ಫೆನಿಶಿಂಗ್ ಮಾಡಿ ಜಾಗ ಉಳಿಸುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ಒತ್ತಾಯಿಸಿದ್ದೇನೆ. ಮಹಾದೇವಿ ಟಾಕೀಸ್ ಹಿಂಭಾಗದಲ್ಲಿ ಪ್ರತಿ ಮಳೆಗೂ ನೀರು ಬರುತ್ತಿದ್ದು, ಭದ್ರಾನದಿಯ ನೀರು ನಿದಿಗೆ ಮೂಲಕ ಆ ಪ್ರದೇಶಕ್ಕೆ ಬರುತ್ತಿದೆ. ಅದಕ್ಕೆ ಅಲ್ಲಲ್ಲಿ ಗುಂಡಿಗಳನ್ನು ನಿರ್ಮಿಸಿ ಅದನ್ನು ಹಿಡಿದಿಡುವ ಯೋಜನೆಯನ್ನು ಕೂಡ ಈಗಾಗಲೇ ಚರ್ಚೆ ಮಾಡಿದ್ದೇನೆ. ಪ್ರಮುಖವಾಗಿ ಸ್ಲಂ ಬೋರ್ಡ್ ಅಧಿಕಾರಿಗಳು ಹಾಗೂ ರಾಜೀವ್ ಗಾಂಧಿ ನಿಗಮದ ಅಧಿಕಾರಿಗಳು ಮತ್ತು ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಜೊತೆಗೂ ಚರ್ಚಿಸಿ ನಗರಕ್ಕೆ ಬರಬೇಕಾಗಿದ್ದ ಸಿಂಗಲ್ 1400 ಮನೆಗಳು ಹಾಗೂ ಆಶ್ರಯ ಯೋಜನೆಯ 3000 ಮನೆಗಳನ್ನು ಕೂಡಲೇ ಪೂರ್ಣಗೊಳಿಸಲು ಒತ್ತಾಯಿಸಿದ್ದೇನೆ. ಸದನದಲ್ಲಿ ನಗರದ ಅನೇಕ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೇನೆ. ಈಗಾಗಲೇ ಮೂರು ಮಂತ್ರಿಗಳ ಜೊತೆಗೆ ಮಾತನಾಡಿದ್ದು, ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

error: Content is protected !!