ಶಿವಮೊಗ್ಗ,ಸೆ.14: ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ವತಿಯಿಂದ ಸೆ.15ರಂದು ಬೆಳಿಗ್ಗೆ 11ಕ್ಕೆ ಕರ್ನಾಟಕ ಸಂಘದಲ್ಲಿ ನಯನ-ಚಿರಂತನ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್‍ನ ಮುಖ್ಯಸ್ಥೆ ಶಾಂತಾಶೆಟ್ಟಿ ತಿಳಿಸಿದ್ದಾರೆ.
ನಯನ-ಚಿರಂತನ ಕಾರ್ಯಕ್ರಮದಲ್ಲಿ ಕಣ್ಣಿನ ತಪಾಸಣೆ, ಬರವಣಿಗೆ, ಆದಿ ಅಕ್ಷರಿ ಗಾಯನ, ತ್ರಾಟಕ, ಕಣ್ಣುಗಳ ಕುರಿತ ಸಂವಾದ , ನಯನದ ಮೋಜಿನ ಆಟ, ದೃಷ್ಟಿ ಯುದ್ಧ ಮುಂತಾದ ಕಾರ್ಯಕ್ರಮಗಳನ್ನು ಬೆಳಗಿನಿಂದ ಸಂಜೆಯವರೆಗೆ ಆಯೋಜಿಸಲಾಗಿದೆ.
ಹಾಗೆಯೇ ಶಂಕರ ಕಣ್ಣಿನ ಆಸ್ಪತ್ರೆ ಅವರಿಂದ ಉಚಿತ ನೇತ್ರಾ ತಪಾಸಣೆ ಕೂಡ ಇರುತ್ತದೆ. ಈ ಕಾರ್ಯಕ್ರಮಕ್ಕೆ ಟ್ರಸ್ಟಿನ ಸದಸ್ಯರು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದ್ದಾರೆ.

error: Content is protected !!