ಶಿವಮೊಗ್ಗ,ಅ.04: ಇಂದು ಅಂಬೇಡ್ಕರ್ ಭವನದಲ್ಲಿ ಮಹಾನಗರ ಪಾಲಿಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಳ್ಳಿ ಮಂಡಲ, ಚಿತ್ರ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ದಸರಾ ಅಂಗವಾಗಿ ಆಯೋಜಿಸಿದ್ದ ದಸರಾ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗದಲ್ಲಿ ದಸರಾ ನಡೆಯುತ್ತಿರುವುದು ಅತ್ಯಂತ ಸ್ವಾಗತರ್ಹವಾಗಿದೆ. ಇದು ಹೆಮ್ಮೆಯ ಜಿಲ್ಲೆ ಸಂಸ್ಕಾರಕ್ಕೆ ಹೆಸರಾಗಿದೆ. ಕಲೆ, ಹೋರಾಟ, ಸಾಹಿತ್ಯ, ಸಂಸ್ಕøತಿ, ಶಿಕ್ಷಣಕ್ಕೆ ಹೆಸರು ಮಾಡಿದೆ. ಮೈಸೂರು ಬಿಟ್ಟರೆ ಶಿವಮೊಗ್ಗ ದಸರಾ ಅತ್ಯಂತ ಪ್ರಸಿದ್ಧವಾಗಿದೆ. ಇದರ ಅಂಗವಾಗಿ ಶಿವಮೊಗ್ಗದಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಅದರಲ್ಲಿ ದಸರಾ ಚಲನಚಿತ್ರೋತ್ಸವ ಕೂಡ ಒಂದು. ಆದರೆ ಈ ಚಲನಚಿತ್ರೋತ್ಸವ ಕಾಟಾಚಾರಕ್ಕಾಗಿ ನಡೆಯದೇ ಅರ್ಥಗರ್ಭೀತವಾಗಿ ಸಾರ್ವಜನಿಕರು ಒಳ್ಳೆಯ ಸಿನಿಮಾವನ್ನು ನೋಡಬೇಕಂತಾಗಿದೆ ಎಂದರು.
ಸಿನಿಮಾ ರಂಗ ಇವತ್ತು ಪ್ರಗತಿಯತ್ತ ಸಾಗುತ್ತಿದೆ. ಒಳ್ಳೆಯ ಸಿನಿಮಾಗಳನ್ನು ನೋಡುತ್ತಾರೆ. ಮನೆಯಿಂದ ಜನರನ್ನು ಹೊರಗೆ ಕರೆದುಕೊಂಡು ಬರುವಂತಹ ವಾತಾವರಣ ನಿರ್ಮಾಣವಾಗಬೇಕಾಗಿದೆ. ಅದರಲ್ಲೂ ಕನ್ನಡದ ಸಿನಿಮಾಗಳು ಉಳಿಯಬೇಕು. ಇದರಿಂದ ಕಲಾವಿದರೂ ಕೂಡ ಉಳಿಯುತ್ತಾರೆ. ಇಂತಹ ವಾತಾವರಣ ನಿರ್ಮಿಸಬೇಕಾದದ್ದು ನಮ್ಮೆಲ್ಲರ ಹೊಣೆ ಎಂದರು.
ಸಾಮಾನ್ಯವಾಗಿ ಚಲನಚಿತ್ರೋತ್ಸವದಲ್ಲಿ ಚಿತ್ರಗಳನ್ನು ಬೆಳಿಗ್ಗೆ 8ಕ್ಕೆ ಪ್ರದರ್ಶಿಸಲಾಗುತ್ತದೆ. ಆದರೆ ಆ ಸಮಯದಲ್ಲಿ ಶ್ರಮಜೀವಿಗಳು, ವಿದ್ಯಾರ್ಥಿಗಳು, ಮಕ್ಕಳು, ಯುವಕರು ಸೇರಿದಂತೆ ಯಾರಿಗೂ ಬಿಡುವು ಇರುವುದಿಲ್ಲ. ಅದು ಚಲನಚಿತ್ರತೋತ್ಸವ ವೀಕ್ಷಿಸುವ ಸಮಯವೂ ಅಲ್ಲ. ಹಾಗಾಗಿ ಈ ಸಮಯವನ್ನು ಬದಲಾವಣೆ ಮಾಡಬೇಕು. ಶಿವಮೊಗ್ಗದಲ್ಲಿ ಆಯೋಜಕರು ಮುಂದಿನ ಬಾರಿಯಾದರೂ ಪ್ರತಿಯೊಬ್ಬರು ಒಳ್ಳೆಯ ಚಲನಚಿತ್ರಗಳನ್ನು ನೋಡುವಂತೆ ಆದಾಗ ಮಾತ್ರ ಚಿತ್ರೋತ್ಸವಗಳು ಯಶಸ್ವಿಯಾಗುತ್ತವೆ. ಇಲ್ಲವಾದರೆ ಇದು ಕಾಟಾಚಾರಕ್ಕೆ ಪ್ರದರ್ಶನಗೊಳುತ್ತದೆ ಅಷ್ಟೇ. ಜಿಲ್ಲಾಡಳಿತವಾಗಲಿ, ಮಹಾನಗರ ಪಾಲಿಕೆಯಾಗಲಿ, ಚಿತ್ರಮಂದಿರದ ಮಾಲೀಕರ ಜೊತೆ ಮಾತನಾಡಿ, ಸಮಯವನ್ನು ಬದಲಾವಣೆ ಮಾಡಿ, ಶ್ರಮಜೀವಿಗಳು ಚಿತ್ರವನ್ನು ನೋಡುವಂತೆ ವಾತಾವರಣ ಕಲ್ಪಿಸಬೇಕು ಎಂದರು.
ಇಂದಿನ ಚಿತ್ರಗಳು ಎಲ್ಲರನ್ನೂ ತಲುಪುವಂತಾಗಬೇಕು. ಮುಖ್ಯವಾಗಿ ಮಕ್ಕಳ ಚಿತ್ರಗಳು ಹೆಚ್ಚಾಗಿ ಬರಬೇಕಾಗಿದೆ. ಚಿತ್ರಗಳಿಂದ ಮಕ್ಕಳು ಪ್ರಭಾವಿತರಾಗಬೇಕು. ಅಂತಹ ವಾತಾವರಣವನ್ನು ರೂಪಿಸಬೇಕು. ಶಿವಮೊಗ್ಗದ ದಸರಾ ಯಶಸ್ವಿಯಾಗಲಿ ಎಂದು ಹಾರೈಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಕಲೆಗೆ ಶಕ್ತಿ ಸಿಗುವಂತಹ ಕಾರ್ಯ ನಡೆಯುತ್ತಿದೆ. ಕಲಾವಿದರ ಜಗತ್ತು ಇದು. ಇದು ಉಳಿದರೆ ಬಹಳ ಚೆನ್ನಾಗಿರುತ್ತದೆ. ಆಗ ಒಟ್ಟು 12 ಚಿತ್ರ ಮಂದಿರಗಳಿದ್ದವು. ಆದರೆ ಇವತ್ತು ಉಳಿದಿರುವುದು ಕೇವಲ 4 ಮಾತ್ರ. ಚಿತ್ರಗಳಿಗೆ ಶಕ್ತಿ ಸಿಗದೇ ಹೋದರೆ ಅನೇಕ ಚಿತ್ರಮಂದಿರಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಚಿತ್ರ ರಂಗ ಚೆನ್ನಾಗಿ ಆಗುವ ರೀತಿಯಲ್ಲಿ ಯೊಚನೆ ಮಾಡಬೇಕು ಎಂದರು.
ಆಗ ಮಾತ್ರ ಚಿತ್ರ ಆಳವಾಗಿ ಬೇರೂರಿ ನಿಲ್ಲುತ್ತದೆ. ತಮ್ಮ ಜೀವನವನ್ನು ಸಮರ್ಪಣೆ ಮಾಡುತ್ತಾರೆ, ಚಿತ್ರ ರಂಗದ ಬದುಕಿಗೆ, ರಂಗ ಭೂಮಿಯ ಬದುಕಿಗೆ ತಮ್ಮ ಬದುಕನ್ನು ಸಮರ್ಪಣೆ ಮಾಡುತ್ತಾರೆ. ಅವರಿಗೆ ಯಶಸ್ಸು ಸಿಗಲಿ ಅದರ ಹಿಂದಿನ ಶ್ರಮ ಮುಖ್ಯ. ಕಲಾವಿದರಿಗೆ ಬೇಕಾದ ಎಲ್ಲ ಸಂಗತಿಯನ್ನು ಯೋಚಿಸೋಣ. ನಿಮ್ಮ ಆಸಕ್ತಿ ಉತ್ಸಾಹ ಬಹಳ ಅಗತ್ಯ. ರಂಗ ಭೂಮಿ ಚಟುವಟಿಕೆ ನಡೆದರೆ ನಾಡಿನ ಸಾಹಿತ್ಯ ಸಂಸ್ಕøತಿ ಉಳಿಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಭೀಮಾ ಚಿತ್ರದ ನಟಿ ಪ್ರಿಯಾ ಶಠಮರ್ಷಣ್ ರಂಗಭೂಮಿ ಕಲಾವಿದ ಅವಿನಾಶ್, ಶಾಖಾಹಾರಿ ನಿರ್ದೇಶಕ ಸಂದೀಪ್ ಸುಂಕದ್, ನಿರ್ಮಾಪಕ ರಾಜೇಶ್ ಕೀಳಂಬಿ, ಬೆಳ್ಳಿಮಂಡಲ ಸಂಚಾಲಕ ವೈದ್ಯನಾಥ್ ಹೆಚ್.ಯು., ಚಲನಚಿತ್ರ ಸಾಹಿತಿ ಡಾ. ವಿ.ನಾಗೇಂದ್ರ ಪ್ರಸಾದ್, ಆಯುಕ್ತೆ ಕವಿತಾ ಯೋಗಪ್ಪನವರ್, ಮುಂತಾದವರು ಇದ್ದರು.
ಡಾ.ಹೆಚ್.ಎಸ್.ನಾಗಭೂಷನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ನಂದನ್, ಶಿವಮೊಗ್ಗ ನಾಗರಾಜ್, ಪ್ರದೀಪ್‍ಕುಮಾರ್, ವಾಸಕಿ ಕುಮಾರ್ ಅವರಿಂದ ಛಾಯಾಚಿತ್ರ ಹಾಗೂ ಕ್ಯಾಮರಾ ಪ್ರದರ್ಶನ ಆಯೋಜಿಸಲಾಗಿತ್ತು.

Leave a Reply

error: Content is protected !!