ಕೃಷಿ ವಿಜ್ಞಾನ ಕೇಂದ್ರ, ನವಿಲೆ, ಶಿವಮೊಗ್ಗ ವತಿಯಿಂದ ಜಿಲ್ಲೆಯ 20 ರೈತ ಯುವಕರು/ಯುವತಿಯರು ತೆಂಗು ಬೆಳೆಯ ನಿರ್ವಹಣೆ ಕುರಿತು 05 ದಿನಗಳ ಕೌಶಲ್ಯ ತರಬೇತಿಯಿದ್ದು, ಆಸಕ್ತರು 15 ದಿವಸಗಳಲ್ಲಿ ನೊಂದಾಯಿಸಲು ಕೋರಿದೆ. ಈ ತರಬೇತಿಯಲ್ಲಿ ತೆಂಗಿನ ಮರದಲ್ಲಿ ಯಂತ್ರಗಳನ್ನು ಬಳಸಿ ಕಾಯಿ ಕೀಳುವುದು, ಉತ್ಪಾದನಾ ತಾಂತ್ರಿಕತೆ ಹಾಗೂ ಸಸ್ಯ ಸಂರಕ್ಷಣೆ ಕುರಿತು ಮಾಹಿತಿ ನೀಡಲಾಗುವುದು. ತರಬೇತಿಗೆ ವಯೋಮಿತಿಯಿದ್ದು ಕಡ್ಡಾಯವಾಗಿ 18-40 ವರ್ಷ ಒಳಗಿನವರಾಗಿರಬೇಕು. ಆಸಕ್ತ ರೈತರು ಈ ಕೆಳಗಿನ ದೂರವಾಣಿ ಸಂಖ್ಯೆಗೆ ನೊಂದಾಣಿ ಮಾಡಿಸಿ. ಹೆಸರು ನೊಂದಾಯಿಲು ವಿಜ್ಞಾನಿ (ಸಸ್ಯ ಸಂರಕ್ಷಣೆ), ಕೃಷಿ ವಿಜ್ಞಾನ ಕೇಂದ್ರ, ನವಿಲೆ, ಶಿವಮೊಗ್ಗ ಇವರನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ: 9739916660.

error: Content is protected !!