ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿ, ರಾಮನಗರ ಜಿಲ್ಲೆ, ಕನಕಪುರದ ವಡಯರಳ್ಳಿಯ ಜೈನ್ ಸ್ಪೋರ್ಟ್ಸ್  ಶಾಲೆಯ ಒಳಾಂಗಣ  ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 17 ವರ್ಷ ವಯೋಮಿತಿಯೊಳಗಿನ ಪ್ರೌಢ ಶಾಲಾ ಬಾಲಕ ಮತ್ತು ಬಾಲಕಿಯರು ಜಿಲ್ಲಾ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ನಮ್ಮ ಶಾಲೆಯ ಬಾಲಕರು ಭಾಗವಹಿಸಿ, ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಅತ್ಯುತ್ತಮ ಆಟದ ಪ್ರದರ್ಶನ ನೀಡಿ, ಉತ್ತಮ ದಾಳಿ, ಅಷ್ಟೇ ರಕ್ಷಣಾತ್ಮಕ ಆಟದ  ಪ್ರದರ್ಶನ ನೀಡಿ ,  ಎದುರಾಳಿ ತಂಡ ರಾಮನಗರ ಜಿಲ್ಲಾ ತಂಡದ ವಿರುದ್ದ ಫೈನಲ್ ಅಂತಿಮ ಪಂದ್ಯದಲ್ಲಿ ನೇರ  ಸೆಟ್ಟುಗಳಿಂದ ಜಯಗಳಿಸಿರುತ್ತಾರೆ.

ಈ ಪ್ರಭಾನ್ವಿತ ಪ್ರತಿಭೆಗಳು  ಬೆಂಗಳೂರು ವಿಭಾಗ ಮಟ್ಟದ ಹ್ಯಾಂಡ್ ಬಾಲ್ ನಲ್ಲಿ ಉತ್ತಮ ಸಾಧನೆ ಮಾಡಿ, ಪ್ರಥಮ ಸ್ಥಾನ ಪಡೆದು, ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ಸಂಸ್ಥೆಯ  ಮಡಿಲಿಗೆ  ತಂದು ಕೊಟ್ಟಿರುತ್ತಾರೆ.

ರಾಮನಗರದಲ್ಲಿ 19 ಮತ್ತು 20 ರಂದು ಎರಡು ದಿನ ನಡೆಯುವ ರಾಜ್ಯಮಟ್ಟದ ಷಟಲ್ ಬ್ಯಾಡ್ಮಿಂಟನ್ ನಲ್ಲಿ ಭಾಗವಹಿಸುತ್ತಿರುವುದು ಮತ್ತೊಂದು ವಿಶೇಷ.

  ಈ ಕ್ರೀಡಾ ಪ್ರತಿಭೆಗಳ ಮುಂದಿನ ಕ್ರೀಡಾ ಜೀವನ  ಯಶಸ್ವಿಯಾಗಲೆಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ  ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಯವರು, ಆಡಳಿತ ಮಂಡಳಿಯ ಸದಸ್ಯರು, ಸಂಸ್ಥೆಯ ಪ್ರಾಂಶುಪಾಲರು , ಹಾಗೂ ಅಧ್ಯಾಪಕ ವೃಂದದವರು ,  ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.
error: Content is protected !!