ಶಿವಮೊಗ್ಗ, ಮೇ-22 : ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ದಿನಾಂಕ 23 ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಿದ್ದು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕ್ರಮ ಕೈಗೊಳ್ಳವ ಸಲುವಾಗಿ ಕಾಲೇಜಿನ ಎದುರಿನ ರಸ್ತೆಯಲ್ಲಿ ವಾಹನ ಸಂಚಾರ ಹಾಗೂ 100 ಮೀಟರ್ ಅಂತರದಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ವಾಹನಗಳಿಗೆ ಸೂಚಿಸಲಾದ ಬದಲಿ ಮಾರ್ಗದಲ್ಲಿ ಚಲಿಸುವಂತೆ ಆದೇಶಿಸಲಾಗಿದೆ.
ಬೆಂಗಳೂರು, ಭದ್ರಾವತಿ, ಎನ್‍ಆರ್. ಪುರ ಕಡೆಯಿಂದ ಬರುವ ವಾಹನಗಳು ಬೈಪಾಸ್ ರಸ್ತೆಯಲ್ಲಿ, ಚಿತ್ರದುರ್ಗ ಹೊಳೆಹೊನ್ನೂರು ಕಡೆಯಿಂದ ಬರುವ ವಾಹನಗಳು ಬಿಹೆಚ್ ರಸ್ತೆ ಮಾರ್ಗವಾಗಿ, ಹೊನ್ನಾಳಿ ದಾವಣಗೆರೆಯಿಂದ ಬರುವ ವಾಹನಗಳು ವಿನೋಬನಗರ ಮಾರ್ಗವಾಗಿ, ಶಿಕಾರಿಪುರ, ಸವಳಂಗ ಕಡೆಯಿಂದ ಬರುವ ವಾಹನಗಳು ಉಷಾ ನರ್ಸಿಂಗ್ ಹೋಂ, ಲಕ್ಷ್ಮೀ ಟಾಕಿಸ್, ಪೊಲೀಸ್ ಚೌಕಿ ಹಾಗೂ ಆಲ್ಕೊಳ ಮಾರ್ಗದಲ್ಲಿ, ಕೆಎಸ್‍ಆರ್‍ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಹೊನ್ನಾಳಿ, ಶಿಕಾರಿಪುರ, ಸೊರಬ, ಹರಿಹರ, ದಾವಣಗೆರೆಗೆ ಸಾಗುವ ವಾಹಾನಗಳು ಹೆಲಿಪ್ಯಾಡ್, ಗೋಪಿ ಸರ್ಕಲ್, ಪೊಲೀಸ್ ಚೌಕಿ ಹಾಗೂ ಸವಳಂಗ ರಸ್ತೆ ಮೂಲಕ ಚಲಿಸುವುದು, ಬೆಂಗಳೂರು, ಭದ್ರಾವತಿ ಹಾಗೂ ಎನ್‍ಆರ್ ಪುರಕ್ಕೆ ತೆರಳುವ ವಾಹನಗಳು ಎಂಆರ್‍ಎಸ್ ಮಾರ್ಗವಾಗಿ ಚಲಿಸುವಂತೆ ಜಿಲ್ಲಾಡಳಿತ ಆದೇಶಿಸಿದೆ.

error: Content is protected !!