News Next

ಶಿವಮೊಗ್ಗ, ಮಾರ್ಚ್- 18 : ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ದಿ: 21/03/2021 ರ ಭಾನುವಾರದಂದು 2020-21ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ ಸೋಮಿನಕೊಪ್ಪ ದೇವರಾಜ ಅರಸ್ ಬಡಾವಣೆ ಪೆಟ್ರೊಲ್ ಬಂಕ್ ಎದುರು, ಜಯನಗರ ಸರ್ವೋದಯ ಶಾಲೆ ಆವರಣದ ಹತ್ತಿರ, ವಿನೋಬನಗರ ಪೊಲೀಸ್ ಚೌಕಿ ಹತ್ತಿರ, ಗುರುಪುರ ಹೊಳೆಹೊನ್ನೂರು ರಸ್ತೆ ಸರ್ಕಾರಿ ಶಾಲೆ ಹತ್ತಿರ ಹಾಗೂ ಕಾಮಾಕ್ಷಿ ಬೀದಿ ಎಲ್‍ಐಸಿ ಆಫೀಸ್ ಎದುರು ಗಣಪತಿ ದೇವಸ್ಥಾನದ ಹತ್ತಿರ” ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂಟರ್ ಗಳನ್ನು ತೆರೆಯಲಾಗಿದೆ. ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

error: Content is protected !!