ಇಂದು ಶಿವಮೊಗ್ಗದ ಹೆಲಿಪ್ಯಾಡ್‌ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ , ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ನಾವು ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಗೆಲ್ಲುತ್ತೇವೆ. ಬಿಹಾರದಲ್ಲಿ ಜನರು ನಿತೀಶ್ ಅವರ ಆಡಳಿತದಿಂದ ಬೇಸತ್ತಿದ್ದಾರೆ. ಇಲ್ಲಿಯೂ ಕಾಂಗ್ರೆಸ್ ಗೆಲ್ಲಲಿದೆ, ಇದೇ ವೇಳೆ ಮಾಜಿ ಸಚಿವ ವಿನಯ್‌ ಕುಲಕಣಿ೯ ಬಂಧನ ಕುರಿತು ಪ್ರತಿಕಿಯಿಸಿದ ಅವರು ವಿನಯ್‌ ಕುಲಕಣಿ೯ ಬಂದನ ರಾಜಕೀಯ ಪ್ರೇರಿತ ಎಂದು ಆರೋಪ ಮಾಡಿದರು, ಉಪ ಚುನಾವಣೆ ಫಲಿತಾಂಶದ ನಂತರ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂದು ಹೇಳಿದರು.

ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಗೋಪಾಲಕೃಷ್ಣ ಬೇಳೂರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಬಿ.ಆರ್.ಜಯಂತ್ ಹಾಗು ಪಕ್ಷದ ಮುಖಂಡರು ಕಾಯ೯ಕತ೯ರು ಭಾಗವಹಿಸಿದ್ದರು.

error: Content is protected !!