ಶಿವಮೊಗ್ಗ ನಗರದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನಯ ಆಲಿಸಿ ನಂರ 5ಸಾವಿರ ಕುಟುಂಬಗಳಿಗೆ ಅಗತ್ಯ ಸಾಮಾಗ್ರಿ ಖರೀದಿಗೆ ತಲಾ 10ಸಾವಿರ ರೂ. ಪರಿಹಾರ. ಹಾಗು ಭಾಗಶ ಬಿದ್ದ ಮನೆಗಳ ರಿಪೇರಿಗೆ ತಕ್ಷಣ 1ಲಕ್ಷ ರೂ. ಸಂಪೂರ್ಣ ಬಿದ್ದ ಮನೆ ನಿರ್ಮಾಣಕ್ಕೆ 5ಲಕ್ಷ ರೂ ಪರಿಹಾರ ಪರಿಹಾರ ಮಾಡುವುದಾಗಿ ತಿಳಿಸಿದರು

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾನಿಗೀಡಾದ ರಸ್ತೆ, ಸೇತುವೆ, ಆಸ್ತಪಾಸ್ತಿಗಳ ನಿರ್ಮಾಣಕ್ಕೆ ತುರ್ತು 50 ಕೋಟಿ ರೂ. ಬಿಡುಗಡೆ. ಕೊಳಗೇರಿ ವ್ಯಾಪ್ತಿಯಲ್ಲಿ ಸಂತ್ರಸ್ತರಿಗೆ ಬಹುಮಹಡಿ ಮನೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದರು. ನಗರದಲ್ಲಿ ತಡೆಗೋಡೆ ನಿರ್ಮಾಣ ಸೇರಿದಂತೆ ನೆರೆ ಹಾವಳಿ ತಪ್ಪಿಸಲು ಶಾಶ್ವತ ಪರಿಹಾರವನ್ನು ಮಾಡುವುದಕ್ಕೆ ಸೂಚನೆ ನೀಡಿದರು

ರಾಜ್ಯದಲ್ಲಿ ಪ್ರವಾಹದಿಂದ ಸಂತ್ರಸ್ತರಾಗಿರುವ ಸುಮಾರು 40 ಸಾವಿರ ಕುಟುಂಬಗಳ ಪುವರ್ವಸತಿಗೆ ಸರಕಾರ ಬದ್ಧ ಎಂದು ತಿಳಿಸಿದರು
ಇದೇ ಸಂದ೯ದಲ್ಲಿ ಶಿವಮೊಗ್ಗ ಶಾಸಕರಾದ ಕೆ.ಎಸ್.‌ ಈಶ್ವರಪ್ಪ, ಸಂಸದರಾದ ಬಿ.ವೈ.ರಾಘವೇಂದ್ರ ಹಾಗು ಇನ್ನತಿರ ಮುಖಂಡರುಗಳು ಉಪಸ್ತಿತರಿದ್ದರು.

error: Content is protected !!