ಪ್ರಮುಖವಾಗಿ ತುಂಗಾನಗರ, ಟಿಪ್ಪುನಗರ, ಗಾಂಧಾರಿನಗರ, ಆರ್. ಎಂ.ಎಲ್ ನಗರ, ಶಾರವತಿ ನಗರ, ಬಾಪೂಜಿನಗರ, ಹೋಳೆ ಬಸ್ ಸ್ಟಾಪ್ ಹತ್ತಿರ, ಸವಾಯಿಪಾಳ್ಯ, ಲಕ್ಕೊಳ್ಳಿ ಡಾಮ್ ಬಳಿ, ವಿನೋಬನಗರ ಹಾಗೂ ಸಾಕಷ್ಟು ಕಾಲೋನಿಗಳು ಮತ್ತು ಮನೆಗಳಿಗೆ ನೀರು ನುಗ್ಗಿ ಅದರಿಂದಾಗಿ ಜನರು ಯಾವರೀತಿಯಿಂದ ಕಷ್ಟಪಡುತ್ತಿದ್ದರು ಎಂಬುದನ್ನು ಪರಿಶೀಲನೆ ಮಾಡಿ ನಂತರ ತೀರ ಮನೆಗಳು ಉರುಳಿ ಬೀಳುತ್ತಿರುವ ಮನೆಗಳಿಗೆ ತಕ್ಷಣ ಅಂತಹ ಮನೆಗಳಿಂದ ಗಂಜಿ ಕೇಂದ್ರದೆಡೆಗೆ ಕರೆದೊಯ್ಯುವಂತೆ ಸೂಪ್ತ ಅಧಿಕಾರಿಗಳಿಗೆ ಆದೇಶ ನೀಡಿದರು. ಹಾಗೂ ನೆರೆ ಪೀಡಿತರು ತಪ್ಪದೇ ಸಮೀಪವಿರುವ ಗಂಜಿ ಕೇಂದ್ರಗಳಿಗೆ ಬರುವಂತೆ ಆದೇಶಿಸಿ ಎಂದು ಎಲ್ಲಾ ಅಧಿಕಾರಿಗಳಿಗೆ ತಿಳಿಸಿದರು. ಬಾಪೂಜಿ ನಗರದ ಜನರು ಗಂಜಿ ಕೇಂದ್ರಕ್ಕೆ ಬಂದಿದ್ದು ಟಿಪ್ಪು ನಗರದ ಜನರು ಬರುವಂತೆ ಆಹ್ವಾನಿಸಿ ಎಂದರು. ಎಲ್ಲಾ ರೀತಿಯ ತಯಾರಿ ಊಟದ ವ್ಯವಸ್ಥೆ ಹಾಗು ಉಳಿದುಕೊಳ್ಳುವ ವ್ಯವಸ್ಥೆ ತಯಾರಾಗಿದೆ

ಮಹಾನಗರಪಾಲಿಕೆಯ ಅಧಿಕಾರಿಗಳಿಗೆ ನೀಡಿರುವ ಆದೇಶಗಳು:

  1. ಎಲ್ಲಾ ಆರೋಗ್ಯಾಧಿಕಾರಿಗಳು, ಅಭಿಯಂತರರು, ರೆವೆನ್ಯೂ ಅಧಿಕಾರಿಗಳು ಮತ್ತು ಎಲ್ಲಾ ಶಾಖೆಯ ಮುಖ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಕೂಡಲೇ ತಕ್ಷಣದಿಂದ ತಮಗೆ ಸಂಬಂಧಿಸಿದ ಎಲ್ಲಾ ವಾರ್ಡ್ ಗಳಿಗೂ ಭೇಟಿ ನೀಡಿ ಅಲ್ಲಿನ ಸ್ಥತಿ ಗತಿಗಳನ್ನು ನಿಯಂತ್ರಿಸತಕ್ಕದ್ದು ಮತ್ತು ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು.
  2. ಯು.ಜಿ.ಡಿ.
    SUTION MACHINES ಗಳನ್ನು ಉಪಯೋಗಿಸಿ
    DEWATERING ಕಾರ್ಯವನ್ನು ಮನೆಗೆ ನೀರು ನುಗ್ಗಿದ ಎಲ್ಲಾ ಮನೆಗಳಿಗೂ ತಕ್ಷಣ ಕಳಿಸುವಂತೆ ಆದೇಶಿಸಿದೆ.
  3. 24*7 ಸಾಹಾಯವಾಣಿ ಸಂಖ್ಯೆ: 18004257677 ಗೆ ಯಾವುದೇ ಕ್ಷಣದಲ್ಲಿ ಸಹ ಕರೆ ಮಾಡಿ ಶಿವಮೊಗ್ಗ ಮಹಾನಗರಪಾಲಿಕೆ ಸಂಬಂಧಿಸಿದ ವರದಿ ಹಾಗೂ ಸಮಸ್ಯೆಗಳನ್ನು ಎಲ್ಲಾ ಸಾರ್ವಜನಿಕರು ತಿಳಿಸುವಂತೆ ಕೋರಿಕೆ.
  4. ಬಿಲ್ ಕಲೆಕ್ಟರ್ ಗಳು ಮತ್ತು ಎಲ್ಲಾ ರೆವೆನ್ಯು ಇನ್ ಸ್ಪೆಕ್ಟರ್ ಗಳು ವರದಿಗಳನ್ನು ತಯಾರಿಸಿ ತಕ್ಷಣ ಶಿವಮೊಗ್ಗ ತಹಾಶೀಲ್ದಾರ್ ರವರಿಗೆ ವರದಿಗಳನ್ನು ಸಲ್ಲಿಸುವಂತೆ ಮತ್ತು ಶಿವಮೊಗ್ಗ ತಹಾಶೀಲ್ದಾರ್ ರವರೊಂದಿಗೆ ಸಂಬಂಧಿಸಿದಂತೆ ವರಿದಿ ನೀಡುವಂತೆ ಆದೇಶಿಸಿದರು.
  5. 3 ಕೇಂದ್ರಗಳಲ್ಲಿ ಗಂಜಿ ಕೇಂಧ್ರಗಳು 24 ಗಂಟೆ ತೆರೆದಿದ್ದು ಬಾಬೂಜಿ ನಗರ, ಶರಾವತಿ ನಗರ ಮತ್ತು ಟಪ್ಪು ನಗರದ ಕಡೆಗೆ ಜನರು ಈ ಕೂಡಲೇ ಬರುವಂತೆ ಆದೇಶಿಸಿ ಎಂದರು.
  6. ಮೇ ತಿಂಗಳಲ್ಲಿ ಮತ್ತು ಜೂನ್ ತಿಂಗಳಲ್ಲಿ 14 ಕಿ. ಮೀ ಎಸ್. ಡಬ್ಲ್ಯೂ.ಡಿ ಮತ್ತು ಇನ್ನಿತರ ಸಣ್ಣ ಚರಂಡಿಗಳನ್ನು ಸ್ವಚ್ಚಗೊಳಿಸಿ ನೀರು ಹರಿಯುವಂತೆ ಅವಕಾಶವಾಗುವಂತೆ ಮತ್ತು ಎಲ್ಲೂ ಸಹ ಬ್ಲೋಕೇಜ್ ಆಗದಂತೆ ನಿಯಂತ್ರಿಸಲು ಅಭಿಯಂತರರಿಗೆ ಆದೇಶಿಸಿದರು.
  7. ನೀರು ಮಧ್ಯಾಹ್ನದ ನಂತರ ಕೆಲುವೆಡೆ ಕಡಿಮೆಯಾದ ಸಂಬಂವದಲ್ಲಿ ಎಲ್ಲಾ ಕೆನಾಲ್ ಗಳನ್ನು ಸುರಕ್ಷಿಸಲು ಮರಳುಗಳ ಮೂಟಿ ಉಪಯೋಗಿಸಿ ಅಗತ್ಯವಿದ್ದ ಕಡೆ ಹೊಸ ಡ್ರೈನೇಜ್ ತೆರೆ ಬೇಕಾದರೆ ಅನುಮತಿ ನೀಡುತ್ತೇನೆ ಎಂದು ಆಯುಕ್ತರು ಆದೇಶಿಸಿದರು.
  8. ಇನ್ನು ಜೆ.ಸಿ.ಬಿ ಗಳ ಅಗತ್ಯವಿದ್ದ ಕಾರಣ ಸಾಕಷ್ಟು ಜಿ.ಸಿ.ಬಿಗಳನ್ನು ಹೊರಗಿನಿಂದ ತೆರೆಸಿಕೊಂಡು ಸಮಸ್ಯೆಗಳನ್ನು ಬರೆಹರಿಸಲಾಗಿದೆ.
  9. ಫೈರ್ ಡಿಪಾರ್ಟ್ಮೆಂಟ್ ನಿಂದ
     DEWATERING  ಕಾರ್ಯ ನಡೆಸಲು ಸಹಾಯವನ್ನು ಮಹಾನಗರಪಾಲಿಕೆ ಕೇಳಿದೆ.
  10. ಎಂತಹ ಪರಿಸ್ಥತಿಯಲ್ಲೂ ಸಾರ್ವಜನಿಕರಿಗೆ ನೆರವಾಗುವಂತೆ ಮತ್ತು ಅಧಿಕಾರಿಗಳು ನಿರ್ಲಕ್ಷ ತೋರದಂತೆ ಕರ್ತವ್ಯ ನಿಭಾಯಿಸುವಂತೆ ಆಯುಕ್ತರು ಆದೇಶಿಸಿದ್ದಾರೆ ಮತ್ತು ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿಗಳು ನಿರ್ಲಕ್ಷ ತೋರಿದರೆ ಅಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತಕ್ಷಣ ಕ್ರಮ ಕೈಗೊಳ್ಳಲು ಆಯುಕ್ತರು ಆದೇಶಿಸಿದರು.
    ಂಣಣಚಿಛಿhmeಟಿಣs ಚಿಡಿeಚಿ
error: Content is protected !!