ಶಿವಮೊಗ್ಗದ ಎನ್. ರವಿಕುಮಾರ್‌ಗೆ - ನಾಡಕವಿ ಗವಿಸಿದ್ಧ ಎನ್. ಬಳ್ಳಾರಿ 2019 ರ ಕಾವ್ಯ ಪ್ರಶಸ್ತಿ

ನಾಡಿನ ಖ್ಯಾತ ಸಾಹಿತಿ‌ “ನಾಡಕವಿ ಗವಿಸಿದ್ಧ ಎನ್. ಬಳ್ಳಾರಿ ರಾಜ್ಯಮಟ್ಟದ ಕಾವ್ಯ ಪ್ರಶಸ್ತಿ” ಗೆ ರಾಜ್ಯಮಟ್ಟದಲ್ಲಿ ಹಸ್ತಪ್ರತಿಗಳನ್ನು ಆಹ್ವಾನಿಸಿತ್ತು.

ಈ ಸಲದ ಕಾವ್ಯ ಪ್ರಶಸ್ತಿಗೆ ಒಟ್ಟು 26 ಹಸ್ತಪ್ರತಿಗಳು ಬಂದಿದ್ದವು. ಈ ಹಸ್ತಪ್ರತಿಗಳ ಪೈಕಿ ಶಿವಮೊಗ್ಗದ ಎನ್. ರವಿಕುಮಾರ ಟೆಲೆಕ್ಸ್ ಅವರ ‘ನೆರ್ಕೆ ಗೋಡೆಯ ರತ್ನಪಕ್ಷಿ’ ಹಸ್ತಪ್ರತಿಯು “2019 ರ ನಾಡಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ” ಆಯ್ಕೆಯಾಗಿದೆ. ಪ್ರಶಸ್ತಿಯು 5,000 ರೂ. ನಗದು ಮತ್ತು ಬೆಳ್ಳಿ ಪದಕವನ್ನು ಒಳಗೊಂಡಿದೆ.

error: Content is protected !!