ಶಿವಮೊಗ್ಗ, ಜೂನ್.6 : ಈ ಸಾಲಿನಲ್ಲಿ ವಿಕಲಚೇತನರಿಗೆ ನೀಡಲಾಗುವ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ವಿಕಲಚೇತನರು ಇದರ ಸದುಪಯೋಗ ಪಡೆಯುವಂತೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ಸಬಲೀಕರಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ವಿಕಲಚೇತನರಿಗೆ ನೀಡಲಾಗುವ ಸಾಧನ ಸಲಕರಣೆಗಳು, ಶಿಶುಪಾಲನಾ ಭತ್ಯೆ, ವಿವಾಹ ಪ್ರೋತ್ಸಾಹಧನ, ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ, ಸಾಧನೆ ಪ್ರತಿಭೆ ಯೋಜನೆ, ನಿರುದ್ಯೋಗ ಭತ್ಯೆಗಳಿಗೆ ಅರ್ಜಿ ಸಲ್ಲಿಸಲು ಜೂನ್ 29 ಕೊನೆಯ ದಿನಾಂಕ ವಾಗಿರುತ್ತದೆ. ಹಾಗೂ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ ಮತ್ತು ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 31 ಆಗಿರುತ್ತದೆ. ಅರ್ಜಿಯನ್ನು ಗ್ರಾಮ ಪಂಚಾಯಿತಿ ವಿಆರ್‍ಡಬ್ಲ್ಯೂ ಅಥವ ತಾಲ್ಲೂಕು ಪಂಚಾಯತಿ ಎಂಆರ್‍ಡಬ್ಲ್ಯೂ ಅವರಿಂದ ಪಡೆಯಬಹುದು ಇಲ್ಲವೆ ಇಲಾಖೆ ವೆಬ್‍ಸೈಟ್ www.dwdsc.kar.nic.in ನಲ್ಲಿ ಪಡೆದು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ತಾಲ್ಲೂಕು ಎಂಆರ್‍ಡಬ್ಲ್ಯೂಗಳ ಮೊಬೈಲ್ ಸಂಖ್ಯೆಗೆ ಸಂಪರ್ಕಿಸುವಂತೆ ತಿಳಿಸಲಾಗಿದೆ. ಶಿವಮೊಗ್ಗ-9980150110, ಭದ್ರಾವತಿ-9880274140, ಶಿಕಾರಿಪುರ-9741161346, ತೀರ್ಥಹಳ್ಳಿ-9480767638, ಸಾಗರ-9535247757, ಸೊರಬ-9591767445, ಹೊಸನಗರ-9731922693.

error: Content is protected !!