News Next

ಶಿವಮೊಗ್ಗ, ಮಾರ್ಚ್ 18 :ಶಿವಮೊಗ್ಗ  ಜಲಮಂಡಳಿಯು ನಗರ ಗ್ರಾಹಕರಿಗೆ ನೀರಿನ ಬಾಕಿ ಕಂದಾಯ ಹಾಗೂ ಪ್ರಸಕ್ತ ಸಾಲಿನ ಕಂದಾಯವನ್ನು ಮಾ.25ರೊಳಗಾಗಿ ಪಾವತಿಸುವಂತೆ ಸೂಚಿಸಿದೆ. ನೀರಿನ ಕಂದಾಯ ಪಾವತಿಸಲು ಬಾಕಿದಾರರು  ಶಿವಮೊಗ್ಗ -1 ಕೇಂದ್ರ, ಜಲಮಂಡಳಿ ಕಚೇರಿ ಹಾಗೂ ಮಹಾನಗರ ಪಾಲಿಕೆ ಆವರಣದಲ್ಲಿರುವ ಕ್ಯಾಷ್ ಕೌಂಟರ್ ಮತ್ತು ಕರ ವಸೂಲಿಗಾರರ ಮುಖಾಂತರ ಪಾವತಿಸುವುದು.  ತಪ್ಪಿದಲ್ಲಿ ಕಾನೂನು ಪ್ರಕಾರ ಮಾ.26 ರಿಂದ ನೀರು ಸರಬರಾಜು ನಳದ /ಒಳಚರಂಡಿ ಸಂಪರ್ಕವನ್ನು ಕಡಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕ.ನ.ನೀ.ಸ ಮತ್ತು ಒ.ಚ.ಮಂ. ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.  

error: Content is protected !!