ತೊಗರಿ ಸಧ್ಯ ಮೊಗ್ಗು ಹಾಗೂ ಆರಂಭದ ಹೂವಾಡುವಿಕೆ ಹಂತದಲ್ಲಿದ್ದು, ಮಂಜಿನ ವಾತಾವರಣದ ನಂತರ ಎಲೆ, ದೇಟು ಹಾಗೂ ಹೂವಿನ ಮೇಲೆ ಸಣ್ಣ ಗೋಲಾಕಾರದ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುವುದರಿಂದ ಮೊಗ್ಗು ಹಾಗೂ ಹೂ ಉದುರುವಿಕೆ ಅಲ್ಲಲ್ಲಿ ಕಂಡು ಬಂದಿದೆ. ಉಷ್ಣಾಂಶ 25 ಸಿ. ಕ್ಕಿಂತ ಕಡೆಮೆ ಹಾಗೂ ಮೊಡಕವಿದ ವಾತವರಣ ಮತ್ತು ತುಂತುರು ಮಳೆ, ಮುಂಜಾನೆ ಮಂಜು ಇದ್ದಾಗ ರೋಗದ ಬಾದೆ ಹೆಚ್ಚಾಗಿ ಕಂಡು ಬರುತ್ತದೆ. ಇದಕ್ಕಾಗಿ ರೈತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ರೋಗದ ಚಿಹ್ನೆಗಳು ಕಂಡು ಬಂದಾಗ ಪ್ರತಿ ಲೀಟರ್ ರೋಗ ನೀರಿಗೆ 1 ಗ್ರಾಂ. ಕಾರ್ಬನ್‍ಡೈಜಿಮ್ ಬೆರೆಸಿ ಸಿಂಪಡಿಸಬೇಕು. ತೊಗರಿಯಲ್ಲಿ ಹೂ ಮತ್ತು ಕಾಯಿ ಉದಿರುವಿಕೆ ನಿಲ್ಲಿಸಲು ಪಲ್ಸ್ ಮ್ಯಾಜಿಕ್ 2 ಕೆಜಿ 200 ಲೀಟರ ನೀರಿನ ಬ್ಯಾರಲ್ ಪ್ರತಿ ಎಕರೆಗೆ ಸಿಂಪಡಿಸಬೇಕು. ಬೆಳೆಯ ಮೇಲೆ ಮಂಜಿನ ಹನಿಗಳು ಬಿದ್ದ ನಂತರ ಮೊಗ್ಗು ಮತ್ತು ಹೂ ಕಪ್ಪಾಗಿ ಸುಟ್ಟು ಎಲೆಗಳಲ್ಲೂ ಕೂಡ ಎಲೆಚುಕ್ಕೆ ರೋಗ ಕಂಡು ಬಂದಿದೆ. ಪ್ರತಿ ವಾರ ಆಗುತ್ತಿರುವ ವಾತಾವರಣದ ಹವಾಮಾನ ಬದಲಾವಣೆ , ಭೂಮಿಯ ತೇವಾಂಶ ರೋಗದ ತೀವ್ರತೆ ಮೇಲೆ ಪರಿಣಾಮ ಬೀರುತ್ತಿದೆ. ಚಳಿಯ ದಿನಗಳು ಇನ್ನೂ ಆರಂಭ. ಚಳಿಯ ಅಂಶ ಹೆಚ್ಚಾದಲ್ಲಿ ಮಾತ್ರ, ಹೊಸ ಮೊಗ್ಗು ಮತ್ತು ಹೂಗಳ ರಚನೆ ಉತ್ತಮವಾಗಬಹುದು ಎಂದು ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ರಾಜು. ಜಿ. ತೆಗ್ಗೆಳ್ಳಿ ಹಾಗೂ ಡಾ. ಜಹೀರ್ ಅಹಮ್ಮದ್ ರವರು ತಿಳಿಸಿದ್ದಾರೆ.

/- ಮುಖ್ಯಸ್ಥರು , ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ

error: Content is protected !!