ಶಿವಮೊಗ್ಗ, ಜೂನ್.14 : 2019 – 20ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಐದನೇ ತರಗತಿ ಉತ್ತೀರ್ಣರಾದ 18 ರಿಂದ 33 ವರ್ಷದ ಯುವಕರಿಗೆ (ಪರಿಶಿಷ್ಠ ಜಾತಿ ಹಾಗೂ ಪಂಗಡದವರಿಗೆ ಎರಡುವರ್ಷ ವಿನಾಯ್ತಿ ಇದೆ.) ವಿವಿಧ ಸ್ವಯಂ ಉದ್ಯೋಗ ಹಾಗೂ ಉದ್ದಿಮೆದಾರರ ಅಡಿ ತರಬೇತಿಗೆ ಅರ್ಜಿ ಅಹ್ವಾನಿಸಲಾಗಿದೆ. 20 ಮಂದಿಗೆ ಅವಕಾಶ ಕಲ್ಪಿಸಲಾಗುವುದು ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಅರ್ಜಿಯನ್ನು ಶಿವಮೊಗ್ಗದ ತೋಟಗಾರಿಕೆ ಉಪನರ್ದೇಶಕರು, ಪುಷ್ಪ ಬೆಳೆ ಉತ್ಕøಷ್ಟ ಕೇಂದ್ರ, ಕಂಟ್ರಿಕ್ಲಬ್ ರಸ್ತೆ, ಶಿವಮೊಗ್ಗ. (ದೂ.ಸಂ.: 08182-240075) ಇಲ್ಲಿಗೆ ಜುಲೈ 12 ರೊಳಗಾಗಿ ತಲುಪಿಸುವಂತೆ ಸೂಚಿಸಲಾಗಿದೆ.

error: Content is protected !!