ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣರವರು ನನಗೆ ಅತ್ಮೀಯರು, ರಾಜ್ಯದ ಹಿರಿಯ ರಾಜಕೀಯ ಮುತ್ಸದ್ದಿ. ಅವರ ಅಳಿಯನ ಅಕಾಲಿಕ ಸಾವು ತುಂಬ ವಿಷಾದ ಉಂಟು ಮಾಡಿದೆ.ಸಾಕಷ್ಟು ಜನರಿಗೆ ಉದ್ಯೋಗವನ್ನು ಕೊಟ್ಟ ಹಿರಿಮೆ ಅವರದು ದೇಶಾದ್ಯಂತ ಹಾಗು ಹೊರದೇಶಗಳಲ್ಲೂ ಕೂಡ ಕಾಫಿಡೇ ಅನ್ನು ಪರಿಚಯಿಸಿದ ಹೆಮ್ಮೆ ಅವರದ್ದು . ಉದ್ಯಮ ನೆಡೆಸುತ್ತಿದ್ದ ಅವರು ವ್ಯವಹಾರದಲ್ಲಿ ಲಾಭ ನಷ್ಠಗಳು ಆಗುವುದು ಸಹಜ ಎಲ್ಲವನ್ನು ಸಮತೋಲನವಾಗಿ ನೋಡಬೇಕು.ಯಾವ ಉದ್ಯಮಿಗಳು ಈ ರೀತಿ ದುಡುಕಬಾರದು.
ಅವರನ್ನು ಅವಲಂಬಿತರಾಗಿರುವ ಕುಟುಂಬಸ್ಥರಿಗೆ ಹಾಗು ಅವರನ್ನು ನಂಬಿ ಕೆಲಸ ಮಾಡುತ್ತಿರುವವರಿಗೆ ನೋವು ಬರಿಸುವ ಶಕ್ತಿ ಭಗಂವತ ನೀಡಲಿ.ಎಂದು ಹೇಳಿದರು

error: Content is protected !!