ಸಾಗರದ ಕಲ್ಯಾಣಿ ಗ್ರಾಫಿಕ್ಸ್‍ನ ಆನಂದ ಅವರಿಗೆ ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಸೇವೆಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿರುವುದಕ್ಕಾಗಿ ಸೋಮವಾರ ಕರ್ನಾಟಕ ಸರ್ಕಾರದ ಈ-ಆಡಳಿತ ಸೇವೆಯ ನಿರ್ದೇಶಕರಾದ ಪ್ರದೀಪ್ ಬೆಂಗಳೂರಿನಲ್ಲಿ ವಿಶೇಷ ಸೇವಾ ಪುರಸ್ಕಾರ ನೀಡಿ ಗೌರವಿಸಿದರು.
ಪ್ರಶಸ್ತಿಗೆ ಕರ್ನಾಟಕದಲ್ಲಿ ಈ ಸಾಲಿನಲ್ಲಿ ಮೂವರನ್ನು ಗುರುತಿಸಲಾಗಿದ್ದು, ಸಾಗರದ ಆನಂದ ಕಲ್ಯಾಣಿ ಕೂಡ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈಗಾಗಲೇ ಅವರಿಗೆ ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಸೇವೆಗಾಗಿ ಪುರಸ್ಕಾರ ಲಭಿಸಿದೆ. ಹಲವಾರು ಪ್ರಸಿದ್ಧ ಸಾಹಿತಿಗಳು, ಕಲಾವಿದರ ಪುಸ್ತಕಗಳಿಗೆ ಮುಖಪುಟ ವಿನ್ಯಾಸ ಮಾಡಿರುವ ಗೌರವ ಇವರಿಗೆ ಸಂದಿದೆ. ಆನಂದ ಅವರು ಸಾಗರದ ಜ್ಯೋತಿ ಕಂಪ್ಯೂಟರ್ಸ್‍ನ ಪ್ರಾಂಶುಪಾಲರಾದ ಕೆ.ಆರ್. ರಾಜಗೋಪಾಲರವರ ಪುತ್ರರಾಗಿರುತ್ತಾರೆ.
ಸೇವಾಸಿಂಧು ಪ್ರಮುಖರಾದ ವರಪ್ರಸಾದ ರೆಡ್ಡಿ ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕøತ ಆನಂದ ಕಲ್ಯಾಣಿರವರನ್ನು ಸೇವಾಸಿಂಧು ಯೋಜನಾ ವ್ಯವಸ್ಥಾಪಕರಾದ ದರ್ಶನ್ ಮತ್ತು ಕಿರಣ್ ಅಭಿನಂದಿಸಿದ್ದಾರೆ.

error: Content is protected !!