ಕವನಗಳು ಲೋಕದ ಅನುಭವಗಳಿಗೆ ಕನ್ನಡಿಯಾಗಬೇಕು:

ಸತ್ಯನಾರಾಯಣ ರಾವ್ ಅಣತಿ
ಶಿವಮೊಗ್ಗ,: ಕವಿ ತನ್ನ ಅನುಭವದ ಜೊತೆಗೆ ಲೋಕದ ಅನುಭವಗಳ ಮಜಲುಗಳನ್ನು ಪರಿಭಾವಿಸುತ್ತ ಚಿಂತಿಸಿ ರಚಿಸಿದ ಕವಿತೆ ಶ್ರೀಮಂತವಾಗಿರುತ್ತದೆ ಎಂದು ಹಿರಿಯಕವಿ ಸತ್ಯನಾರಾಯಣ ರಾವ್ ಅಣತಿ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಸಹ್ಯಾದ್ರಿ ಉತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಶುಕ್ರವಾರ ಆಯೋಜಿಸಿದ್ದ ಕವಿಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಅವರು ಗೋಷ್ಠಿಯಲ್ಲಿ ಜಗತ್ತಿನ ಎಲ್ಲಾ ವಿಷಯಗಳು ಮೂಡಿ ಬಂದಿದೆ. ಸಾಂಸ್ಕøತಿಕ ವಾರಸುದಾರರಾದ ನಾವು ಸಾಹಿತ್ಯವನ್ನು ಉಳಿಯುವಂತೆ ಬೆಳೆಸಬೇಕು. ಕವಿತೆ ನಾವು ಬದುಕುತ್ತಿರುವ ಸಮಾಜ, ಕಾಲ ಹಾಗೂ ಪರಂಪರೆಯ ಜೊತೆಗಿನ ಪ್ರಯಾಣವಾಗಿರ ಬೇಕು. ಕವಿತೆ ನಿರ್ಣಯವಾಗಿರಬಾರದು ಸಮಾಜದ ಮುಂದೆ ಪರಿಸ್ಥಿತಿಯನ್ನು ಬಿಚ್ಚಿಡುವ ದೀವಿಗೆಯಾಗ ಬೇಕು ಎಂದು ಅವರು ಹೇಳಿದರು.
ಸಹನೆ ಮತ್ತು ಸಹಿಷ್ಣುತೆ ಕಳೆದುಕೊಳ್ಳುತ್ತಿರುವ ದೇಶದ ಯುವಕರನ್ನ ನೋಡಿದರೆ ದೇಶದ ಭವಿಷ್ಯದ ಬಗ್ಗೆ ನನಗೆ ಬೇಸರವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಧರ್ಮ ರಾಜಕರಣ ಹಾಗೂ ದೇಶಭಕ್ತಿ ಹೆಸರಿನಲ್ಲಾದ ಕಲಬುರ್ಗಿ, ಪನ್ಸಾರೆ ಹಾಗೂ ಗೌರಿ ಲಂಕೇಶ್ ಹತ್ಯೆಗಳನ್ನ ಗಮನಿಸಿದರೆ ಜನತೆ ಯಾವ ದಿಕ್ಕಿಗೆ ನಮ್ಮ ದೇಶವನ್ನ ನಡೆಸುತ್ತಿದ್ದಾರೆ ಎಂಬ ಭಯ ಕಾಡುತ್ತದೆ ಎಂದರು. ಈ ನಿಟ್ಟಿನಲ್ಲಿ ಸೃಜನಾಶೀಲರು ಬರಹಗಳ ಮೂಲಕ ಸಂವಾದಗಳ ಮೂಲಕ ದೇಶದ ಭವಿಷ್ಯಕ್ಕೆ ಉತ್ತಮ ದಾರಿ ತೋರುವ ಅಗತ್ಯತೆ ಎದ್ದು ಕಾಣುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕವಿಗೋಷ್ಠಿಯಲ್ಲಿ ಜಿಲ್ಲೆಯ ನಾನಾ ಭಾಗದ ಕವಿಗಳಾದ ಪ್ರೊ. ಸತ್ಯನಾರಾಯಣ್, ಕುಮರ್.ಆರ್.ಕೆ., ಗೋಪಜ್ಜಿ ನಾಗಪ್ಪ, ಗೋಪಾಲಕೃಷ್ಣ ಹುಲಿಮನೆ, ಶ್ರೀಗಾರ ಶ್ರೀನಿವಾಸ್, ಕೆ.ಸಿದ್ದಪ್ಪ, ರಾಮ ಸುಬ್ರಾವ್ ಶೇಠ್, ಸುದೀಂದ್ರ, ಶಶಿ ಸಂಪಳ್ಳಿ ಮತ್ತಿತರರು ಕವನ ವಾಚಿಸಿದರು.

error: Content is protected !!