News Next

ಶಿವಮೊಗ್ಗ, ಮಾರ್ಚ್ 29 : ಶಿವಮೊಗ್ಗ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ರಾ.ಸ.ನೌ.ಸೌ.ಸ.ನಿ.ಯ ರಿಟರ್ನಿಂಗ್ ಅಧಿಕಾರಿ ಶಂಕರ್ ಪ್ರಸಾದ್ ಜಿ.ಎಂ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ರಾಜ್ಯ ಲೆಕ್ಕಪತ್ರ ಇಲಾಖೆಯ ಸಿ.ಎಸ್. ಷಡಾಕ್ಷರಿ, ಜಲ ಸಂಪನ್ಮೂಲ ಇಲಾಕೆಯ ಆರ್. ಮೋಹನ್‍ಕುಮಾರ್, ಆರೋಗ್ಯ ಇಲಾಖೆ ಐ.ಪಿ.ಶಾಂತರಾಜ್, ಕೃಷಿ ಇಲಾಖೆಯ ಎಸ್.ಹೆಚ್.ಸುರೇಶ್, ಆಯುಷ್ ಇಲಾಖೆಯ ಡಾ||ಸಿ.ಎ.ಹಿರೇಮಠ, ಸಹಕಾರ ಇಲಾಖೆಯ ಎಸ್.ಆರ್.ನರಸಿಂಹಮೂರ್ತಿ, ಆರೋಗ್ಯ ಇಲಾಖೆಯ ಟಿ.ಜಿ.ಅಶೋಕ್, ತಾ.ಪಂ.ಯ ಬ್ಯಾಟೇಗೌಡ ಟಿ.ಸಿ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎನ್.ಎಂ.ರಂಗನಾಥ, ಖಜಾನೆ ಇಲಾಖೆಯ ಎಸ್.ಸಿ.ಚೀಲೂರು, ಮೀನುಗಾರಿಕೆ ಇಲಾಖೆ ಟಿ.ರಾಜಪ್ಪ, ಆರೋಗ್ಯ ಇಲಾಖೆಯ ವಿ.ಲಕ್ಷ್ಮಣ, ಪೊಲೀಸ್ ಇಲಾಖೆಯ ಡಿ.ವಿ.ಸತೀಶ್, ಆರಣ್ಯ ಇಲಾಖೆಯ ರಾಜು ಲಿಂಬು ಚವ್ಹಾಣ, ಪಶುಪಾಲನ ಇಲಾಖೆಯ ಟಿ.ವಿ.ತಾರಾ, ಶಿಕ್ಷಣ ಇಲಾಖೆಯ ಎಸ್.ರೇಖಾ ಮತ್ತು ಜೆ.ಪಿ.ಅನಿತ ಇವರುಗಳು ಕ್ರಮಬದ್ಧವಾಗಿ ಚುನಾಯಿತರಾಗಿದ್ದಾರೆಂದು ಅವರು ತಿಳಿಸಿರುತ್ತಾರೆ.

error: Content is protected !!