ಶಿವಮೊಗ್ಗ, ಜೂನ್.6 : ರಂಗಾಯಣದ ರೆಪರ್ಟಿರಿ ರಂಗಪಯಣ ತಂಡದಿಂದ ನಡೆಯುವ ರಂಗತೇರು ಕಾರ್ಯಕ್ರಮಕ್ಕೆ ದಿನಾಂಕ 7 ರ ಬೆಳಗ್ಗೆ 8.30ಕ್ಕೆ ನಗರದ ಸುವರ್ಣ ಸಂಸ್ಕøತಿ ಭವನದಲ್ಲಿ ಚಾಲನೆ ದೊರೆಯಲಿದೆ. ರಂಗವಿಮರ್ಶಕ ಸಮಾಜವಾದಿ ಚಿಂತಕ ಡಿ.ಎಸ್. ನಾಗಭೂಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯದ ನಿರ್ದೇಶಕಿ ಕೆ.ಎಂ ಜಾನಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲಾವಿದರ ರಂಗ ತಂಡಗಳ ಒಕ್ಕೂಟದ ಖಜಾಂಚಿ ಆರ್.ಎಸ್ ಹಾಲಸ್ವಾಮಿ ಉಪಸ್ಥಿತರಿರಲಿದ್ದಾರೆ ಎಂದು ರಂಗಾಯಣದ ನಿರ್ದೇಶಕ ಡಾ. ಎಂ ಗಣೇಶ ತಿಳಿಸಿದ್ದಾರೆ.

error: Content is protected !!