ಶ್ರೀವಿಜಯ ಕಲಾನಿಕೇತನದ ವತಿಯಿಂದ “ನೃತ್ಯ ನೀರಾಜನ ” ಶಾಸ್ತ್ರೀಯ ನೃತ್ಯ ಮಾಲಿಕೆಯಲ್ಲಿ ಜೂನ್ 29 ನೇ ತಾರೀಖು ಶನಿವಾರದಂದು ಸಂಜೆ 6.00 ಕ್ಕೆ ‘ಕಥಕ್ ನೃತ್ಯ’ ಮತ್ತು ‘ಭರತನಾಟ್ಯ ಕಾರ್ಯಕ್ರಮ’ ರಾಜೇಂದ್ರನಗರದ ಪವಿತ್ರಾಂಗಣದಲ್ಲಿ ಏರ್ಪಾಡಾಗಿದೆ. ಬೆಂಗಳೂರಿನ ಕಲಾವಿದರಾದ ವಿದ್ವಾನ್ ಲಕ್ಷ್ಮೀನಾರಾಯಣ್ ಜಿನಾ ಅವರಿಂದ ಕಥಕ್ ನೃತ್ಯ ಕಾರ್ಯಕ್ರಮ ಹಾಗೂ ವಿದುಷಿ ಸ್ನೇಹಾ ನಾರಾಯಣ್ ಅವರಿಂದ ಭರತನಾಟ್ಯ ಕಾರ್ಯಕ್ರಮ ನೆಡೆಯಲಿದ್ದು, ಪ್ರೊ|| ಶಂಕರ ನಾರಾಯಣ ಶಾಸ್ತ್ರೀ ಶೈಕ್ಷಣಿಕ ನಿರ್ದೇಶಕರು, ಪೇಸ್ ವಿದ್ಯಾಲಯ ಶಿವಮೊಗ್ಗ. ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, “ಶ್ರೀವಿಜಯ” ದ ಅಧ್ಯಕ್ಷರಾದ ಡಾ|| ಕೆ.ಆರ್. ಶ್ರೀಧರ್ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮ ವೀಕ್ಷಿಸಲು ಸಹೃದಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ‘ಶ್ರೀವಿಜಯ’ ಕೋರುತ್ತದೆ.

error: Content is protected !!