ನೌಕರರಿಗೆ ಭವಿಷ್ಯನಿಧಿ ಹಣವು ಸುಲಭವಾಗಿ ದೊರಕಲು ಭವಿಷ್ಯನಿಧಿ ಇಲಾಖೆಯು ಇತ್ತೀಚೆಗೆ ಹಲವಾರು ಹೊಸ ಯೋಜನೆಗಳನ್ನು ರೂಪಿಸಿದ್ದು, ಈ ಯೋಜನೆಯನ್ನು ಎಲ್ಲಾ ನೌಕರರು ಸರಿಯಾದ ಕ್ರಮದಲ್ಲಿ ಬಳಸಿದರೆ, ಮುಂದಿನ ದಿನಗಳಲ್ಲಿ ಅವರು ತಮ್ಮ ಹಣವನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಕರ್ನಾಟಕ ಮತ್ತು ಗೋವಾ ರಾಜ್ಯಗಳ ಹೆಚ್ಚುವರಿ ಕೇಂದ್ರೀಯ ಭವಿಷ್ಯನಿಧಿ ಆಯುಕ್ತರಾದ ಶ್ರೀಯುತ ಕಮ್ಮಾ ನಾರಾಯಣ್‍ರವರು ತಿಳಿಸಿದರು.

ಅವರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಭವಿಷ್ಯನಿಧಿ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಭವಿಷ್ಯನಿಧಿಯ ಬಗ್ಗೆ ಸಮಸ್ಯೆಗಳು ಹಾಗೂ ಪರಿಹಾರ ಮತ್ತು ಭವಿಷ್ಯನಿಧಿ ಹಣವನ್ನು ಪಡೆದುಕೊಳ್ಳಲು ಸುಲಭವಾದ ಮಾರ್ಗದ ಬಗ್ಗೆ ಸಂವಾದ ಹಾಗೂ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಭವಿಷ್ಯನಿಧಿ ಹಣವನ್ನು ಪಡೆದುಕೊಳ್ಳಲು Uಂಓ-ಏಙಅ-SಇಇಆIಓಉ ಡಿಜಿಟಲ್ ಕೀ ಅಂತ್ಯ ಅವಶ್ಯಕವಾಗಿರುತ್ತದೆ. ಇದರಿಂದ ನೌಕರರಿಗೆ ಬಹಳಷ್ಟು ಅನುಕೂಲವಿದೆ. ಏಕೆಂದರೆ ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿ ಬೇರೆ ಕಾರಣದಿಂದ ಆ ಸಂಸ್ಥೆಯನ್ನು ಬಿಟ್ಟು ಮತ್ತೊಂದು ಸಂಸ್ಥೆ ಅಥವಾ ಕಂಪನಿಗೆ ಸೇರಿದ ಅವರ ಭವಿಷ್ಯನಿಧಿ ಖಾತೆ ಅಲ್ಲಿಯೂ ಸಹ ಮುಂದುವರೆಯುತ್ತದೆ. ಹಾಗೂ ಮುಖ್ಯವಾಗಿ ಒಂದು ಸಂಸ್ಥೆಗೆ ಸೇರಿದ ತರುವಾಯ ಸಂಬಳ, ವೇತನ ಪಡೆದ ನಂತರ ಕಡ್ಡಯವಾಗಿ ಸಕಾಲದಲ್ಲಿ ಭವಿಷ್ಯ ನಿಧಿಯನ್ನು ಕಡಿತಗೊಳಿಸಿ ಭವಿಷ್ಯನಿಧಿ ಖಾತೆಗೆ ಜಮಾಮಾಡಬೇಕು ಎಂದು ನುಡಿದರು.


ಈ ವಿಚಾರ ಸಂಕೀರ್ಣದ ಅಧ್ಯಕ್ಷತೆಯನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಜೆ.ಆರ್.ವಾಸುದೇವ್‍ರವರು ವಹಿಸಿ ನೌಕರರು ಹಾಗೂ ಮಾಲೀಕರು ಅಲಕ್ಷ್ಯತನದಿಂದ ಸರಿಯಾದ ವೇಳೆಯಲ್ಲಿ, ಸರಿಯಾದ ಕ್ರಮದಲ್ಲಿ ಭವಿಷ್ಯನಿಧಿ ಹಣವನ್ನು ಇಲಾಖೆಗೆ ಪಾವತಿಸದೇ ಕಡೆಯ ಕ್ಷಣದಲ್ಲಿ ಪರಿತಪಿಸುತ್ತಾರೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಭವಿಷ್ಯನಿಧಿ ಇಲಾಖೆಯವರು ನಮ್ಮ ಕಛೇರಿಯಲ್ಲೇ ತಮ್ಮ ಸಿಬ್ಬಂಧಿಯೊಂದಿಗೆ ಶಿಬಿರವನ್ನು ಆಯೋಜಿಸಿ, ಎಲ್ಲರನ್ನೂ ಭವಿಷ್ಯನಿಧಿ ಖಾತೆಯೊಳಗೆ ಸರಿಯಾದ ರೀತಿಯಲ್ಲಿ ಸೇರ್ಪಡಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಭವಿಷ್ಯನಿಧಿಯ ರಿಜಿನಲ್ ಕಮಿಷನರ್ ವಿ.ಹುಸೇನಪ್ಪ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ರುದ್ರೇಶ್, ಕಾರ್ಯದರ್ಶಿ ಗೋಪಿನಾಥ್, ಸಾರ್ವಜನಿಕ ಸಂರ್ಪಕಾಧಿಕಾರಿ ಜಿ.ವಿಜಯಕುಮಾರ್, ಮಾಚೇನಹಳ್ಳಿ ಕೈಗಾರಿಕಾ ಅಧ್ಯಕ್ಷರಾದ ರಮೇಶ್ ಹೆಗ್ಡೆ, ಶ್ರೀನಾಥ್, ಶಾಹಿ ಗಾರ್ಮೆಂಟ್ಸ್‍ನ ಎಂ.ಎಸ್.ರಾಮಚಂದ್ರಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ದಾವಣಗೆರೆ, ಹೊನ್ನಾಳಿ, ಹರಿಹರ, ಚಿತ್ರದುರ್ಗ ವಿಭಾಗದಿಂದ ಮಾಲೀಕರು, ಕಾರ್ಮಿಕರು, ಕಛೇರಿಯ ಸಿಬ್ಬಂಧಿಗಳು ಆಗಮಿಸಿದ್ದರು.

error: Content is protected !!